Thursday, April 21, 2016

ಮಕ್ಕಳ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಪತ್ರಕರ್ತ ನಾಗರಾಜ ಕಿರಣಗಿ ಮಾಹಿತಿ

ಮಕ್ಕಳ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಪತ್ರಕರ್ತ ನಾಗರಾಜ ಕಿರಣಗಿ ಮಾಹಿತಿ 
  
ಧಾರವಾಡ: ನಮ್ಮ ದೇಶದಲ್ಲಿನ ನ್ಯಾಯಾಲಯ ವ್ಯವಸ್ಥೆ, ಕಾನೂನು ತಿಳುವಳಿಕೆ ಕುರಿತು ಪ್ರತಿಯೊಬ್ಬರು ಅರಿವು ಹೊಂದುವುದು ಅಗತ್ಯವಾಗಿದೆ. ವಿಶೇಷವಾಗಿ ಈ ಕುರಿತು ಮಕ್ಕಳಿಗೆ ಶಾಲಾ ಹಂತದಲ್ಲಿಯೇ ನ್ಯಾಯದಾನ ಪ್ರಕ್ರಿಯೆಯ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹಿರಿಯ ವಕೀಲ ವೆಂಕಟೇಶ ಕುಲಕರಣಿ ಹೇಳಿದರು.
ಅವರು ಕಮಲಾಪುರ ಸಕರ್ಾರಿ ಶಾಲೆ ನಂ. 4ರಲ್ಲಿ ಬಾಲನಂದನ ಟ್ರಸ್ಟ್, ಮಾಸ್ ಮೀಡಿಯಾ ಕಮ್ಯೂನಿಕೇಶನ್ಸ್ ಫಾರ್ ಅರ್ಬನ್ ಆಂಡ್ ರೂರಲ್ ಡೆವಲಪ್ಮೆಂಟ್ ಸೆಂಟರ್ ಕನರ್ಾಟಕ, ಪುರ ಟ್ರಸ್ಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯದ ಗುಲಗಂಜಿಕೊಪ್ಪ ಕ್ಲಸ್ಟರ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕನಸು ಹೊತ್ತ ಚಿಣ್ಣರ ವಿಶೇಷ ಉಚಿತ ಬೇಸಿಗೆ ಶಿಬಿರದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಾನೂನು ತಿಳುವಳಿಕೆ ಹಾಗೂ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲೂಕು ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಿಂದ ಸುಪ್ರೀಂಕೋಟರ್್ ವರೆಗೆ ವಿವಿಧ ಹಂತಗಳು, ಗ್ರಾಹಕರ ನ್ಯಾಯಾಲಯ ಹಾಗೂ ವಕೀಲರಾಗಲು ಇರುವ ಅರ್ಹತೆ, ವಿವಿಧ ಪ್ರಕರಣಗಳ ಕುರಿತು ಉದಾಹರಣೆ ಸಮೇತ ಮಕ್ಕಳಿಗೆ ತಿಳುವಳಿಕೆ ನೀಡಿದರು.
ಬಳಿಕ ಮಕ್ಕಳಿಗೆ ಕುವೆಂಪು ಅವರ ಬೊಮ್ಮನಹಳ್ಳಿ ಕಿಂದರಜೋಗಿ ಪದ್ಯ ಓದಿ, ಮಕ್ಕಳ ಮನ ಸೊರೆಗೊಂಡರು. ನಂತರ ಮಕ್ಕಳೊಂದಿಗೆ ವಿವಿಧ ವಿಷಯಗಳ ಕುರಿತು ಸಂವಾದ ನಡೆಯಿತು.
ಮಕ್ಕಳ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಪತ್ರಕರ್ತ ನಾಗರಾಜ ಕಿರಣಗಿ ಮಾಹಿತಿ ನೀಡಿದರು. ಸಿಆರ್ಪಿ ಆರ್.ಎಂ. ಸವಣೂರ ಮಕ್ಕಳಿಗೆ ಹಾಡು ಕುಣಿತ ಕಲಿಸಿಕೊಟ್ಟರು. ಶಿಬಿರದ ನಿದರ್ೇಶಕ ವಿಜಯಾನಂದ ದೊಡವಾಡ ಮಕ್ಕಳಿಗೆ ಯೋಗ, ಶಿಸ್ತು ಹಾಗೂ ಆರೋಗ್ಯದ ಗುಟ್ಟುಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿದರ್ೇಶಕ ಶಿವಶಂಕರ ಹಿರೇಮಠ, ಮಾಸ್ ಮೀಡಿಯಾ ಕಮ್ಯೂನಿಕೇಶನ್ಸ್ ಫಾರ್ ಅರ್ಬನ್ ಆಂಡ್ ರೂರಲ್ ಡೆವಲಪ್ಮೆಂಟ್ ಸೆಂಟರ್ ಕನರ್ಾಟಕ ಅಧ್ಯಕ್ಷ ಶಶಿಕಾಂತ ದೇವಾಡಿಗ, ಬಾಲನಂದನ ಟ್ರಸ್ಟ್ ಅಧ್ಯಕ್ಷೆ ಪ್ರೀತಿ ಎನ್. ಕಿರಣಗಿ ಉಪಸ್ಥಿತರಿದ್ದರು.

ವೈದ್ಯರ ಸಾಕ್ಷಾಧಾರ ಬಹುಮುಖ್ಯ


 ವೈದ್ಯರ ಸಾಕ್ಷಾಧಾರ ಬಹುಮುಖ್ಯ 
             
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವಲ್ಲಿ ವೈದ್ಯರ ಸಾಕ್ಷಾಧಾರ ಬಹುಮುಖ್ಯ ಎಂದು ಚೈಲ್ಡ ರೈಟ್ ಟ್ರಸ್ಟನ ಅಧ್ಯಕ್ಷರು ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಹೋರಾಟಗಾರರು ಶ್ರೀ ವಾಸುದೇವ ಶಮರ್ಾ. 
ತರಬೇತಿ ಕಾಯರ್ಾಗಾರವನ್ನು  ಜಿಲ್ಲೆಯ ವೈದ್ಯಾಧಿಕಾರಿಗಳಿಗೆ, ವೈದ್ಯರುಗಳಿಗೆ ಹಾಗೂ ಹಳ್ಳಿಯ ವೈದ್ಯರುಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ದಿನಾಂಕ:26-03-2016 ರಂದು ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಸಭಾ ಭವನದಲ್ಲಿ (ಪೊಕ್ಸೊ ಮಕ್ಕಳ ಮೇಲಿನ ಲೈಂಗಿಕ ತಡೆ ಕಾಯ್ದೆಯಲ್ಲಿ) ಬಾಲನ್ಯಾಯ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಕಾರ್ಯಗಾರದಲ್ಲಿ ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ಮಾಜಿ ಸದಸ್ಯರು ಹಾಗೂ ಮಕ್ಕಳ ಹಕ್ಕುಗಳ ಟ್ರಸ್ಟ್ನ ಅಧ್ಯಕ್ಷರು ಶ್ರೀ ವಾಸುದೇವ ಶಮರ್ಾರವರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದರು. ಹಾಗೂ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಶ್ರೀ ಆನಂದ ಲೊಬೋ ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರು, ಆಯೋಗದ ಸಮಗ್ರ ಮಾಹಿತಿಯನ್ನು ನೀಡಿದರು. ಹಾಗೂ ವಿಶೇಷವಾಗಿ ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಮಕ್ಕಳಿಗಿರುವ ಕಾನೂನಿನ ಬಗ್ಗೆ ತಿಳಿಯಪಡಿಸಿದರು. ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ|| ದೊಡ್ಡಮನಿ, ಹಾಗೂ ಜಿಲ್ಲೆಯ ವೈದ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಡಾ|| ಬಿ. ಉಷಾ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮಕ್ಕಳಿಗೆ ಯಾವ ರೀತಿಯಾದ ರಕ್ಷಣೆಯನ್ನು ನೀಡಬೇಕೆನ್ನುವುದರ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯ ವೈಖರಿಯ ಬಗ್ಗೆ ತಿಳಿಸಿದರು. ಶ್ರೀ ವಾಸುದೇವ ಶಮರ್ಾ ರವರು  ವೈದ್ಯರುಗಳಿಗೆ ಹಾಗೂ ವೈದ್ಯಾಧಿಕಾರಿಗಳಿಗೆ ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕೆ ರಕ್ಷಣಾ ಘಟಕವನ್ನು ಅಭಿನಂದಿಸುತ್ತಾ  ಈ ರೀತಿಯ ಕಾರ್ಯಕ್ರಮಗಳು ಅತ್ಯಂತ ಮುಖ್ಯವಾಗಿವೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹಾಗೂ ಮಕ್ಕಳನ್ನ ಒಳ್ಳೆಯ ದೃಷ್ಠಿಯಿಂದ ಕಾಣಬೇಕು "ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ" ಆ ನಿಟ್ಟಿನಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದಾಗಿರುವದು ಎಂದು ತಿಳಿಸಿದರು. ಅದೇ ರೀತಿಯಾಗಿ ನಮ್ಮ ಸಮಾಜದ ಹಾಗೂ ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ. ಎಂದು ತಿಳಿಸುತ್ತ ಮಕ್ಕಳಿಗೆ ಸುರಕ್ಷತೆ ಮತ್ತು ಅಸುರಕ್ಷತೆ ಸ್ಪರ್ಶದ ಬಗ್ಗೆ ತಿಳಿಸುತ್ತ ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಅರಿವನ್ನು ಮೂಡಿಸಬೇಕು. ಮಕ್ಕಳಿಗೆ ಉಚಿತ ಸಹಾಯವಾಣಿ (1098) ಚನ್ನಾಗಿ ಕೆಲಸ ಮಾಡುತ್ತಿರುವ ಬಗ್ಗೆ ತಿಳಿಸಿದರು. ಮಕ್ಕಳ ಮೇಲಿನ ದೌರ್ಜನ್ಯ ದಿನೇ ದಿನೇ ಜಾಸ್ತಿ ಆಗುತ್ತಿದೆ. ಕಾರಣ ಅದನ್ನು ತಡೆಯಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸುತ್ತಾ ಪೊಕ್ಸೊ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಹಾಗೂ ತೆರೆದ ತಂಗುದಾಣದ ಸಿಬ್ಬಂದಿಗಳು ಭಾಗವಹಿಸಿದ್ದರು ಸಾಂಸ್ಥಿಕ ರಕ್ಷಣಾಧಿಕಾರಿ ಶ್ರೀ ನಿಂಗಪ್ಪ ಮಡಿವಾಳರ ನಿರೂಪಿಸಿದರು. ಕೊನೆಯದಾಗಿ ವಂದನಾರ್ಪಣೆಯನ್ನು ಡಾ|| ಹೊನ್ನಕೆರಿ ನಡೆಸಿ ಕೊಟ್ಟರು. 



ಅಭಿವೃದ್ಧಿಗೆ ಪತ್ರಕರ್ತರು ಶ್ರಮಿಸಬ:ೇಕು

                        ಅಭಿವೃದ್ಧಿಗೆ ಪತ್ರಕರ್ತರು ಶ್ರಮಿಸಬ:ೇಕು
ಧಾರವಾಡ: ಜನಸಾಮಾನ್ಯರ  ಬದುಕಿಗಾಗಿ  ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳ  ಕೊರತೆಗಳನ್ನು ಬಿಂಬಿಸುವ ಮೂಲಕ ಅಭಿವೃದ್ಧಿಗೆ ಪತ್ರಕರ್ತರು ಶ್ರಮಿಸಬೇಕು ಎಂದು ಪತ್ರಕರ್ತ ನಾಗರಾಜ ಕಿರಣಿಗಿ  ಹೇಳಿದರು.
    ಕವಿವಿಯ ಪತ್ರಿಕೋದ್ಯಮ ವಿಭಾಗವು ಆಯೋಜಿಸಿದ್ದ ಸಂವಹನ ಕೂಟದಲ್ಲಿ " ಅಭಿವೃದ್ಧಿ ಪತ್ರಿಕೋದ್ಯಮ" ಎಂಬ ವéಿಷಯ ಕುರಿತು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
    ಅಭಿವೃದ್ಧಿ ಕಡೆಗೆ ಕಿಂಚಿತ್ತು ಕಾಳಜಿ ಇಲ್ಲದವ ಒಬ್ಬ ಉತ್ತಮ ಪತ್ರಕರ್ತ ಆಗಲಾರ. ಅಭಿವೃದ್ಧಿ ಎಡೆಗಿನ ಸುದ್ದಿಗಳನ್ನು ಬಿತ್ತಿಸುವುದರಿಂದ ಸ್ಪೂತರ್ಿಗೊಂಡು ಅಂತಹ ಕೆಲಸವನ್ನು ಸ್ವ ಹಿತಾಸಕ್ತಿಯಿಂದ ಮಾಡುವ ಮಾಡಿಸುವ ಕೆಲಸ ಮಾಧ್ಯಮದ್ದಾಗಿರಬೇಕು. ಇಂದು ನಕಾರಾತ್ಮಕ ಚಿಂತನೆಯನ್ನು ಬಿತ್ತುವಂತಹ ಪತ್ರಿಕೆಗಳನ್ನು ಓದುವುದನ್ನು ಅಂತಹ ಸುಧ್ದಿ ವಾಹಿನಿಗಳನ್ನು ನೋಡುವುದನ್ನು ಜನ ನಿಲ್ಲಿಸಬೇಕು. ಜನರು ಒಳ್ಳೆಯ ವಿಚಾರಗಳನ್ನು ಮಾತ್ರ ಮಾಧ್ಯಮದಿಂದ ಸ್ವೀಕರಿಸುತ್ತಾರೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲೇ ಅನೇಕ ಉದಾಹರಣೆಗಳಿವೆ ಎಂಬುದನ್ನು ತಿಳಿಸಿದರು.
     ಸದ್ಯ ಮಾಧ್ಯಮಗಳಲ್ಲಿ ಪತ್ರಕರ್ತರಿಗೆ ಅನೇಕ ನಾನಾ ಒತ್ತಡಗಳಿದ್ದು, ಪತ್ರಕರ್ತ ಸಕಾರತ್ಮವಾಗಿ ಚಿಂತಿಸಬೇಕು. ಇಂದು ಗ್ರಾಮೀಣ ಪ್ರದೇಶಗಳಲ್ಲಿ ಜಮೀನು ಹೊಂದಿದ ರೈತನೂ ಕೂಲಿ ಕಾಮರ್ಿಕನಾಗಿದ್ದಾನೆ. ಇದಂರಿಂದ ಬೇಸತ್ತ ರೈತರು ಜೀವನೋಪಾಯವನ್ನು ಹುಡಕಿಕೊಂಡು ನಗರ ಪ್ರದೇಶಗಳಿಗೆ ದಿನದ ಕೂಲಿ ಬದುಕು ನಡಿಸುವಂತಾಗಿದೆ. ಹಳ್ಳಿ ಜನರ ಮೂಲ ಕಸುಬು ಕಾರ್ಯಗಳ ವಾಸ್ತವ ಸ್ಥಿತಿ ಮತ್ತು ಅವರ ಬದುಕಲ್ಲಿ ಬೆಳಕು ಚೆಲ್ಲಬೇಕಿದ್ದು,ಈ ದೃಷ್ಠಿಯಿಂದ ಪತ್ರಕರ್ತ ಮಾನವೀಯತೆಯಿಂದ ಬೆಳಕು ಚೆಲ್ಲವ ಕೆಲಸ ಮಾಡಬೇಕೆಂದು ಯುವ ಪತ್ರಕರ್ತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ ಜೆ ಎಮ್ ಚಂದುನವರ ಜನಪರ ಪತ್ರಿಕೋದ್ಯಮವು ಇಂದು ಸಮಾಜದಲ್ಲಿ ಪತ್ರಕರ್ತರಿಗೆ ಸವಾಲಾಗಿದ್ದು, ಅಭಿವೃದ್ಧಿಪರ ಚಿಂತನೆಗಳಿಂದ ಜನಸಾಮಾನ್ಯರ ಬದುಕುಗಳನ್ನು ಸುಧಾರಿಸುವ ಜವಾಬ್ಧಾರಿಯನ್ನು ಯುವ ಪತ್ರಕರ್ತರ ಮೇಲಿದೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕ ಡಾ ವಿಶ್ವನಾಥ ಚಿಂತಾಮಣಿ ಉಪಸ್ಥಿತರಿದ್ದರು. ಮಹಾಂತೇಶ ಜಾಂಗಟಿ ನಿರೂಪಿಸಿದರು. ಕಾವೇರಿ ಝಂಡೆ ಪ್ರಾಥರ್ಿಸಿದರು. ಗಾಯತ್ರಿ ಬಡಿಗೇರ ಅತಿಥಿ ಪರಿಚಯ ಮಾಡಿದರು. ಬಾಲಕೃಷ್ಣ ಜಾಡಬಂಡಿ ಸ್ವಾಗತಿಸಿದರು. ರಾಕಿ ನಾಯಕ ವಂದಿಸಿದರು.

nagaraj kiranagi paper coverage





Monday, April 18, 2016

ನಾನು ಮತ್ತು ನನ್ನ ಒಡಲಾಳ ಸೇರಿ ಮೂರು ಕೃತಿಗಳ ಲೋಕಾರ್ಪಣೆ

 ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಟೂರಿಂಗ್ ಟಾಕೀಜ್, ನಾನು ಮತ್ತು ನನ್ನ ಒಡಲಾಳ ಹಾಗೂ ಆಹಾರ ಆರೋಗ್ಯ ಹಾಗೂ ಸೂಕ್ಷ್ಮಾಣು ಜೀವಿಗಳು ಕೃತಿಗಳನ್ನು ನಾಡೋಜ ಪಾಟೀಲ ಪುಟ್ಟಪ್ಪ ಲೋಕಾರ್ಪಣೆಗೊಳಿಸಿದರು. ನಾಗರಾಜ ಕಿರಣಗಿ,  ಡಾ. ಸುವಣರ್ಾ ಸಿ. ಚವಣ್ಣವರ, ಮನೋಹರ ಯಡವಟ್ಟಿ, ಪ್ರೊ. ವಸಂತ ಕುಷ್ಟಗಿ, ಶ್ಯಾಮ್ ಕುಷ್ಟಗಿ ಹಾಗೂ ಸುಭಾಸ ನರೇಂದ್ರ ಉಪಸ್ಥಿತರಿದ್ದರು
ಟೂರಿಂಗ್ ಟಾಕೀಜ್, ನಾನು ಮತ್ತು ನನ್ನ ಒಡಲಾಳ ಸೇರಿ ಮೂರು ಕೃತಿಗಳ ಲೋಕಾರ್ಪಣೆ
ಪತ್ರಕರ್ತರು ಚಾರಿತ್ರ್ಯವಂತರಾಗಿರಬೇಕು : ಪಾಟೀಲ ಪುಟ್ಟಪ್ಪ
ಧಾರವಾಡ: ಪತ್ರಕರ್ತರು, ಲೇಖಕರು ಹಾಗೂ ಸಾಹಿತಿಗಳು   ಚಾರಿತ್ರ್ಯವಂತರಾಗಿರಬೇಕು. ಚಾರಿತ್ರ್ಯವಂತರಾಗಿದ್ದರೇ ಮಾತ್ರ ಅವರನ್ನು ಸಮಾಜ ದೊಡ್ಡವರೆಂದು ಗುರುತಿಸುತ್ತದೆ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದರು.
ಅವರು ನಗರದ ಆಲೂರು ವೆಂಕಟರಾವ್ ಭವನದಲ್ಲಿ ಶನಿವಾರ ಸಂಜೆ 6 ಗಂಟೆಗೆ ನಮ್ಮ ಪಲ್ಸ್ ಮೀಡಿಯಾ ಮನೆ ಪ್ರಕಾಶನ ಸಂಸ್ಥೆ ಹಾಗೂ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರಾದ ಮನೋಹರ ಯಡವಟ್ಟಿ ಅವರ ಟೂರಿಂಗ್ ಟಾಕೀಜ್, ನಾಗರಾಜ ಕಿರಣಗಿ ಅವರ ನಾನು ಮತ್ತು ನನ್ನ ಒಡಲಾಳ ಹಾಗೂ ವಿಜ್ಞಾನ ಲೇಖಕಿ ಡಾ. ಸುವಣರ್ಾ ಸಿ. ಚವಣ್ಣವರ ಅವರ ಆಹಾರ ಆರೋಗ್ಯ ಹಾಗೂ ಸೂಕ್ಷ್ಮಾಣು ಜೀವಿಗಳು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಅಧ್ಯಯನ ಕೊರತೆ ಎದುರಿಸುತ್ತಿದ್ದು, ಯಾರೊಬ್ಬರ ಪೂವರ್ಾಪುರ, ಇತಿಹಾಸದ ಜ್ಞಾನವಿಲ್ಲದವರು ಪತ್ರಕರ್ತರಾಗುತ್ತಿರುವುದು ಸೋಜಿಗದ ಸಂಗತಿಯಾಗಿದೆ. ಪತ್ರಿಕೋದ್ಯಮದ ಕಾಲೇಜುಗಳು ಸಹ ವಿದ್ಯಾಥರ್ಿಗಳಲ್ಲಿ ಜ್ಞಾನ ತುಂಬುವಲ್ಲಿ ವಿಫಲವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಪತ್ರಕರ್ತರು ಯಾರ ಬಿಡೇಗೂ ಒಳಗಾಗದೇ, ಯಾರೊಂದಿಗೂ ರಾಜೀ ಮಾಡಿಕೊಳ್ಳದೆ ಕೆಲಸಮಾಡಬೇಕು. ಪತ್ರಕರ್ತರು ಒಂದು ಬಾರಿ ಚಾರಿತ್ರ್ಯ ಕಳೆದುಕೊಂಡರೆ ಮರಳಿ ಪಡೆಯುವುದು ಕಷ್ಟ ಸಾಧ್ಯ ಎಂದು ಹೇಳಿದರು. 
ಹಿರಿಯ ಪತ್ರಕರ್ತರಾದ  ಗಣೇಶ ಜೋಶಿ, ಸಚಿನ್ ಶಿವಪೂರ ಹಾಗೂ ಹಿರಿಯ ಛಾಯಾಗ್ರಾಹಕರಾದ ಗಣಪತಿ ಜರತಾರಫರ್ ಅವರಿಗೆ 2016ರ ಪಿಎಂ2 ಸಂಸ್ಥೆಯ ಗೌರವ ಸಮ್ಮಾನ ಹಾಗೂ ಪತ್ರಿಕಾ ಸಾಹಿತಿಗಳಾದ ಮನೋಹರ ಯಡವಟ್ಟಿ, ನಾಗರಾಜ ಕಿರಣಗಿ, ವಿಜ್ಞಾನ ಲೇಖಕಿ ಡಾ.. ಸುವಣರ್ಾ ಸಿ. ಚವಣ್ಣವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 
ಹಿರಿಯ ರಂಗಕಮರ್ಿ ಸುಭಾಸ ನರೇಂದ್ರ ಅವರು ಮನೋಹರ ಯಡವಟ್ಟಿ ಅವರ ಟೂರಿಂಗ್ ಟಾಕೀಸ್ ಹಾಗೂ ನಾಗರಾಜ ಕಿರಣಗಿ ಅವರ ನಾನು ಮತ್ತು ನನ್ನ ಒಡಲಾಳ ಕೃತಿಗಳ ಕುರಿತು ಮಾತನಾಡಿದರು.
ಪ್ರಕಾಶಕ ಶ್ಯಾಮ್ ಕುಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಪಾಟೀಲ, ರವೀಂದ್ರ ಬಣಕಾರ ಕಾರ್ಯಕ್ರಮ ನಿರ್ವಹಿಸಿದರು.

ಬಾಕ್ಸ್...
ಎಪ್ರಿಲ್ನಲ್ಲಿ ಪ್ರಧಾನಿ ಮೋದಿ ಭೇಟಿ
ಹುಬ್ಬಳ್ಳಿ ಧಾರವಾಡ ಅಭಿವೃದ್ಧಿಯಿಂದ ವಂಚಿತವಾಗಿದ್ದು, ಕೇವಲ ನಾಲ್ಕು ಜನ ರಾಜಕಾರಣಿಗಳು ಮಾತ್ರ ಅಭಿವೃದ್ಧಿಯಾಗಿದ್ದಾರೆ. ಅಭಿವೃದ್ಧಿಯೆಂದರೆ ನಾಲ್ಕು ಜನ ರಾಜಕಾರಣಿಗಳ ಅಭಿವೃದ್ಧಿಯಲ್ಲ. ಈ ಬಗ್ಗೆ ಅವರು ತಪ್ಪಾಗಿ ತಿಳಿದುಕೊಂಡಂತೆ ಕಾಣುತ್ತಿದ್ದಾರೆ. ಹೀಗಾಗಿ ಎಪ್ರಿಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಈ ಕುರಿತು ಪ್ರಶ್ನಿಸಲಾಗುವುದು. ಹುಬ್ಬಳ್ಳಿ ಧಾರವಾಡಕ್ಕೆ ಒಂದು ರಿಂಗ್ ರಸ್ತೆಯಿಲ್ಲ. ಆದರೆ ರಾಜಕಾರಣಿಗಳ ಕೈ ತುಂಬಾ ರಿಂಗ್ಗಳಿವೆ ಎಂದು ಟೀಕಿಸಿದರು.
ನಮ್ಮ ಜನ ಬಾಯಿ ಮುಚ್ಚಿ ಕುಳಿತುಕೊಂಡಿರುವುದರಿಂದ ರಾಜಕಾರಣಿಗಳು ಹಣ ಮಾಡುವುದನ್ನೇ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮುಖ್ಯ ಅಂಗ ಬಾಯಿ. ನಮ್ಮ ಬಾಯಿ ಕೆಲಸ ಮಾಡದಿರುವುದರಿಂದ ಅವರು ಆಡಿದ್ದೇ ಆಟವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಜನ ಗಂಭೀರ ಚಿಂತನೆ ನಡೆಸಬೇಕು ಎಂದು ಹೇಳಿದರು.



ನಾಗರಾಜ ಕಿರಣಗಿ ಸೇರಿ ಮೂವರ ಕೃತಿ ಲೋಕಾರ್ಪಣೆ ಮಾ. 26ರಂದು



ನಾಗರಾಜ ಕಿರಣಗಿ ಸೇರಿ ಮೂವರ ಕೃತಿ ಲೋಕಾರ್ಪಣೆ ಮಾ. 26ರಂದು
ಹಲವು ಹಿರಿಯ ಪತ್ರಕರ್ತರಿಗೆ ಗೌರವ ಸಮ್ಮಾನ
ಧಾರವಾಡ: ನಾಡಿನ ಹಿರಿಯ ಪತ್ರಕರ್ತರಾದ ಮನೋಹರ ಯಡವಟ್ಟಿ, ನಾಗರಾಜ ಕಿರಣಗಿ ಹಾಗೂ ವಿಜ್ಞಾನ ಲೇಖಕಿ ಡಾ. ಸುವಣರ್ಾ ಸಿ. ಚವಣ್ಣವರ ಅವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭ ಮಾ. 26ರಂದು ಶನಿವಾರ ಸಂಜೆ 4 ಗಂಟೆಗೆ ನಗರದ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶಕ ಶ್ಯಾಮ್ ಕುಷ್ಟಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕನರ್ಾಟಕ ಕುಲ ಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ನಮ್ಮ ಪಲ್ಸ್ ಮೀಡಿಯಾ ಮನೆ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭವನ್ನು ನಿವೃತ್ತ ಡಿವೈಎಸ್ಪಿ ಕೃಷ್ಣಮೂತರ್ಿ ಹೊಸ್ಕೋಟಿ ಉದ್ಘಾಟಿಸುವರು. ನಾಡೋಜ ಪಾಟೀಲ ಪುಟ್ಟಪ್ಪ ಅವರು ಹಿರಿಯ ಪತ್ರಕರ್ತರಾದ ಮನೋಹರ ಯಡವಟ್ಟಿ ಅವರ ಟೂರಿಂಗ್ ಟಾಕೀಸ್, ಪತ್ರಕರ್ತ ನಾಗರಾಜ ಕಿರಣಗಿಯವರ ಚೊಚ್ಚಲ ಕವನ ಸಂಕಲನ ನಾನು ಮತ್ತು ನನ್ನ ಒಡಲಾಳ ಮತ್ತು ವಿಜ್ಞಾನ ಲೇಖಕಿ ಡಾ. ಸುವಣರ್ಾ ಸಿ. ಚವಣ್ಣವರ ಅವರ ಆಹಾರ ಆರೋಗ್ಯ ಹಾಗೂ ಸೂಕ್ಷ್ಮಾಣು ಜೀವಿಗಳು ಕೃತಿಯನ್ನು ಲೋಕಾರ್ಪಣೆಗೊಳಿಸುವರು. ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಆಲೂರು ವೆಂಕಟರಾವ್ ಟ್ರಸ್ಟ್ನ ಸದಸ್ಯ ವೆಂಕಟೇಶ ದೇಸಾಯಿ ಪಾಲ್ಗೊಳ್ಳುವರು.
ಟೂರಿಂಗ್ ಟಾಕೀಸ್ ಹಾಗೂ ನಾನು ಮತ್ತು ನನ್ನ ಒಡಲಾಳ ಕೃತಿಗಳ ಕುರಿತು ಹಿರಿಯ ರಂಗಕಮರ್ಿ ಸುಭಾಸ ನರೇಂದ್ರ ಹಾಗೂ ಆಹಾರ ಆರೋಗ್ಯ ಹಾಗೂ ಸೂಕ್ಷ್ಮಾಣು ಜೀವಿಗಳು ಕುರಿತು ಕೃಷಿ ವಿವಿ ಪ್ರಾಧ್ಯಾಪಕಿ ಡಾ. ಗಂಗಾ ವಿ. ಎಣಗಿ ಮಾತನಾಡುವರು.
ಹಿರಿಯರಾದ ಸುಭದ್ರಾಬಾಯಿ ಕುಷ್ಟಗಿ, ನಮಿತಾ ಕೆ. ಜೋಶಿ, ಅರುಣ ಕುಷ್ಟಗಿ, ಶ್ಯಾಮಸುಂದರ ಜೋಶಿ, ಪರಮೇಶ್ವರಪ್ಪ ಬಣಕಾರ, ಹಿತವರಾದ ವಿನೋದ ಅಂಬೇಕರ, ನಂದಾ ರಾಜುಗೌಡ, ಚಿದಂಬರ ಕುಲಕಣರ್ಿ ಅವರಿಗೆ ಗೌರವಿಸಲಾಗುವುದು.
ನಂತರ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತರಾದ ಮಲ್ಲಿಕಾಜರ್ುನ ಸಿದ್ಧಣ್ಣವರ, ಗಣೇಶ ಜೋಶಿ, ಜಿ.ಟಿ. ಹೆಗಡೆ, ಸಚಿನ್ ಶಿವಪೂರ, ಸಂಜಯ ಡೊಂಗ್ರೆ, ಹಾಗೂ ಹಿರಿಯ ಛಾಯಾಗ್ರಾಹಕರಾದ ಎಂ.ಆರ್. ಮಂಜುನಾಥ, ಗಣಪತಿ ಜರತಾರಫರ್ ಹಾಗೂ ರಾಕೇಶ ಬಾಬಜಿ ಅವರಿಗೆ 2016ರ ಪಿಎಂ2 ಸಂಸ್ಥೆಯ ಗೌರವ ಸಮ್ಮಾನ ನೆರವೇರಿಸಲಾಗುವುದು. ಬಳಿಕ ಪತ್ರಿಕಾ ಸಾಹಿತಿಗಳಾದ ಮನೋಹರ ಯಡವಟ್ಟಿ, ನಾಗರಾಜ ಕಿರಣಗಿ, ವಿಜ್ಞಾನ ಲೇಖಕಿ ಡಾ.. ಸುವಣರ್ಾ ಸಿ. ಚವಣ್ಣವರ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, March 9, 2016

ಕಲಬುರಗಿಯಲ್ಲಿ ಪತ್ರಕರ್ತ ನಾಗರಾಜ ಕಿರಣಗಿ ಸೇರಿ ನಾಲ್ವರ ಕೃತಿ ಲೋಕಾರ್ಪಣೆ

ಕಲಬುರಗಿಯ ಕನ್ನಡ ಸಾಹಿತ್ಯ ಸಂಘದಲ್ಲಿ ನಮ್ಮ ಪಲ್ಸ್ ಮೀಡಿಯಾ ಮನೆ ಆಯೋಜಿಸಿದ್ದ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ನಾಲ್ವರು ಪತ್ರಕರ್ತರ ಕೃತಿಗಳನ್ನು ವಿವಿಧ ಕಾಲೇಜುಗಳ ವಿದ್ಯಾಥರ್ಿನಿಯರು ತೆಲೆ ಮೇಲೆ ಬುಟ್ಟಿಯನ್ನು ಹೊತ್ತುಕೊಂಡು ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದದ್ದು ಹೀಗೆ.

ಕಲಬುರಗಿಯ ಕನ್ನಡ ಸಾಹಿತ್ಯ ಸಂಘದಲ್ಲಿ ನಮ್ಮ ಪಲ್ಸ್ ಮೀಡಿಯಾ ಮನೆ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಶೇಷಮೂತರ್ಿ ಅವಧಾನಿ, ನಾಗರಾಜ ಕಿರಣಗಿ, ಶ್ರೀನಿವಾಸ ಸಿರನೂರಕರ್ ಹಾಗೂ ಜಯತೀರ್ಥ ಕಾಗಲ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಕಾಶಕ ಶ್ಯಾಮ ಕುಷ್ಟಗಿ, ಬಸವರಾಜ ಭೀಮಳ್ಳಿ, ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಇದ್ದರು. 

ಕಲಬುರಗಿಯ ಕನ್ನಡ ಸಾಹಿತ್ಯ ಸಂಘದಲ್ಲಿ ನಮ್ಮ ಪಲ್ಸ್ ಮೀಡಿಯಾ ಮನೆ ಆಯೋಜಿಸಿದ್ದ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭ
* ಕಲಬುರಗಿಯಲ್ಲಿ ಪತ್ರಕರ್ತ ನಾಗರಾಜ ಕಿರಣಗಿ ಸೇರಿ ನಾಲ್ವರ ಕೃತಿ ಲೋಕಾರ್ಪಣೆ
ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಬೇಡ : ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ ಸಲಹೆ 
ಧಾರವಾಡ: ಸಾಹಿತಿಗಳು ಹಾಗೂ ಪತ್ರಕರ್ತರು ಸಮಾಜ ಕಟ್ಟುವ ಕೆಲಸ ಮಾಡಬೇಕೆ ಹೊರತು, ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡಬಾರದು ಎಂದು ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಸಲಹೆ ನೀಡಿದರು.
ಅವರು ಕಲಬುರಗಿಯ ಕನ್ನಡ ಸಾಹಿತ್ಯ ಸಂಘದಲ್ಲಿ ಹಿರಿಯ ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ್ ಅವರ ಸ್ಮಾಲ್ ಆಲ್ಸೋ ಮ್ಯಾಟರ್ಸ್, ಶೇಷಮೂತರ್ಿ ಅವಧಾನಿ ಅವರ ಅಭಿವೃದ್ಧಿಯ ಅನ್ವೇಷಣೆಯಲ್ಲಿ, ನಾಗರಾಜ ಕಿರಣಗಿಯವರ "ನಾನು ಮತ್ತು ನನ್ನ ಒಡಲಾಳ" ಕವನ ಸಂಕಲನ ಹಾಗೂ ದಿ. ವಿ.ಎನ್. ಕಾಗಲ್ಕರ್ ಅವರ ಜೀವಿತಾವಧಿಯ ಕಾಗಲ್ಕರ್ ಡೈರಿ ಆನ್ ಕಲಬರುಗಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.   
ಇತ್ತೀಚಿನ ದಿನಗಳಲ್ಲಿ ಅಕ್ಷರ ಲೋಕದ ಮೂಲಕ ಸಾಹಿತಿಗಳಲ್ಲಿ ಹಾಗೂ ಪತ್ರಕರ್ತರಲ್ಲಿ ಅಸಹನೆ ಭಾವನೆ ಹೆಚ್ಚುತ್ತಿದೆ. ಒಬ್ಬರನ್ನು ಹೊಗಳಿ, ಇನ್ನೊಬ್ಬರನ್ನು ತೆಗಳುವ ಕೆಲಸ ನಿಲ್ಲಬೇಕಿದೆ. ಸಾಂಸ್ಕೃತಿಕ ಲೋಕದಿಂದ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕಿದೆ. ಪರಸ್ಪರ ಟೀಕಾ ಮನೋಭಾವನೆ, ದ್ವೇಷ ಹುಟ್ಟುಹಾಕಬಾರದು ಎಂದು ಹೇಳಿದರು. 
ಪತ್ರಕರ್ತ ನಾಗರಾಜ ಕಿರಣಗಿಯವರ ಮೂರನೇ ಕೃತಿ ಹಾಗೂ ಚೊಚ್ಚಲ ಕವನ ಸಂಕಲನ `ನಾನು ಮತ್ತು ನನ್ನ ಒಡಲಾಳ' ಪತ್ರಕರ್ತರ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದ್ದು, ಅವರು ತಮ್ಮ ಸಂವೇದನಾಶೀಲ ಸಾಹಿತ್ಯದ ಮೂಲಕ ಸಮಾಜ ಬೆಳಗುವ ಕೆಲಸ ಮಾಡಬೇಕಿದೆ. ಅವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಆಶಿಸಿದರು. 
ಬಳಿಕ ಹಿರಿಯ ಪತ್ರಕರ್ತರಾದ ಶೇಷಮೂತರ್ಿ ಅವಧಾನಿ, ನಾಗರಾಜ ಕಿರಣಗಿ, ಶ್ರೀನಿವಾಸ ಸಿರನೂರಕರ್, ಜಯತೀರ್ಥ ಕಾಗಲಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹೈದ್ರಾಬಾದ ಕನರ್ಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ ಅವರು ಸಮಾರಂಭ ಉದ್ಘಾಟಿಸಿದರು. ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಅಧ್ಯಕ್ಷತೆ ವಹಿಸುವರು. 
ನಮ್ಮ ಪಲ್ಸ್ ಮೀಡಿಯಾ ಮನೆ ಪ್ರಕಾಶಕ  ಶ್ಯಾಮ ಕುಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ. ಆನಂದ ಕಿತ್ತೂರ ಹಾಗೂ ಡಾ. ಸಂಗೀತಾ   ಕಟ್ಟಿಮನಿ ಕೃತಿಗಳನ್ನು ಪರಿಚಯಿಸಿದರು. 

ಬಾಕ್ಸ್...
ಪುಸ್ತಕಗಳ ಮೆರವಣಿಗೆ...
ನಾಲ್ವರು ಪತ್ರಕರ್ತರ ಕೃತಿಗಳನ್ನು ವಿವಿಧ ಕಾಲೇಜುಗಳ ವಿದ್ಯಾಥರ್ಿನಿಯರು ತೆಲೆ ಮೇಲೆ ಬುಟ್ಟಿಯನ್ನು ಹೊತ್ತುಕೊಂಡು ಮೆರವಣಿಗೆ ಮೂಲಕ ವೇದಿಕೆಗೆ ಕರೆ ತಂದರು. ಆ ಮೂಲ ಪ್ರಕಾಶಕ ಶ್ಯಾಮ ಕುಷ್ಟಗಿ ಎಲ್ಲರ ಗಮನ ಸೆಳೆದರು. ಅಲ್ಲದೆ, ಸನ್ಮಾನಿತರಿಗೆ ಆರತಿ ಬೆಳಗಿ, ಸಿಹಿ ನೀಡುವ ದೇಸಿ ಸಂಸ್ಕೃತಿಯನ್ನು ಅನಾವರಣಗೊಳಿಸುವ ಮೂಲಕ ಸಮಾರಂಭಕ್ಕೆ ಇನ್ನಷ್ಟು ಮೆರಗು ನೀಡಿದರು.