ನನ್ನ ಎರಡು ಪುಸ್ತಕಗಳು ಇತ್ತೀಚೆಗೆ ಬಿಡುಗಡೆಗೊಂಡಿವೆ. ಮೊದಲನೇಯದು ಬೈಲೂರಿನ ನಿಷ್ಕಲಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಅವರ ಪ್ರವಚನದ ಸಾರವನ್ನು ನಿರೂಪಣೆ ಮಾಡಿರುವುದು. ಅದನ್ನು ಜೂನ್ 8ರಂದು ಮುಂಡರಗಿಯಲ್ಲಿ ತೋಂಟದಾರ್ಯ ಶಾಖಾಮಠದ ನಿರಂಜನ ಚರಪಟ್ಟಾಧಿಕಾರ ಸಂದರ್ಭದಲ್ಲಿ ಗದುಗಿನ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಮೊದಲ ಕೃತಿಯನ್ನು ವಿಜಯಾನಂದ ದೊಡವಾಡ ಅವರು ತಮ್ಮ ದೊಡವಾಡ ಪ್ರಕಾಶನದ ಮೂಲಕ ಹೊರ ತಂದಿದ್ದಾರೆ. ಎರಡನೇಯದು ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಸಾರ್ ಪ್ರಜೆಗಳು ಪುಸ್ತಕ ವಿವಿಧ ಲೇಖನಗಳ ಬರಹಗಳನ್ನು ಒಳಗೊಂಡಿದೆ. ಅದನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ವೀರೇಂದ್ರ ಪಾಟೀಲ ಕಾಲೇಜ್ನಲ್ಲಿ ಜುಲೈ 5ರಂದು ಹಿರಿಯ ಪತ್ರಕರ್ತ ಕೆ. ಸತ್ಯನಾರಾಯಣ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಇದಕ್ಕೆ ನಾಡಿನ ಅನೇಕ ಹಿರಿಯ ಪತ್ರಕರ್ತರು ಸಾಕ್ಷಿಯಾದರು