Tuesday, June 30, 2015

NAGARAJ KIRANAGI'S KAVANA

 ಸರಿಪಡಿಸೋಣ


ಅವರು ಕೂಗಾಡುತ್ತಿದ್ದಾರೆ
ಇವರು ಕಿತ್ತಾಡುತ್ತಿದ್ದಾರೆ
ಬನ್ನಿ
ನಾವು ಒಂದಾಗೋಣ
ಅವರ ಕೂಗಾಟ
ಇವರ ಹಾರಾಟ
ಕೇಳಿ ಸಾಕಾಗಿದೆ
ಬನ್ನಿ
ನಾವು ಒಂದೂಗೂಡಿಸೋಣ
ಅವರ ದುರಾಸೆ
ಇವರ ಭರವಸೆ
ಬರೀ ವರಸೆ
ನೋಡಿ ನೋವಾಗಿದೆ
ಬನ್ನಿ
ನಾವು ಸರಿಪಡಿಸೋಣ
         
              ನಾಗರಾಜ ಕಿರಣಗಿ

       ನೋವು

ನಿನ್ನೋಳಗಿನ ನೋವು
ನನ್ನೊಳಗಿನ ಕೂಗು
ನಿನ್ನೊಳಗಿನ ಭಾವ
ನನ್ನೊಳಗಿನ ಜೀವ
ಒಂದಾಗಿತ್ತು.

ನಿನ್ನೊಳಗಿನ ನಲಿವು
ನನ್ನೊಳಗಿನ ಒಲವು
ನಿನ್ನೊಳಗಿನ ಬಸಿರು
ನನ್ನೊಳಗಿನ ಉಸಿರು
ಬೆರೆತಿತ್ತು.

ಆದರೂ
ನಿನ್ನೊಳಗಿನ ಮನಸ್ಸು
ನನ್ನೊಳಗಿನ ಹೃದಯ
ನಿನ್ನೊಳಗಿನ ಸಂತಸ
ನನ್ನೊಳಗಿನ ದುಃಖ
ಒಂದಾಗಲಿಲ್ಲ.

ಒಮ್ಮೆಯೂ ತಿರುಗಿ
ನೋಡಲಿಲ್ಲ ನೀನು
ನೋವು ನಲಿವು
ಸುಖ-ದುಃಖ
ಹಾಗೆಯೇ ಉಳಿದವೆ
ಇನ್ನೂ ಜೀವಂತ
ಧಾವಂತ ಜಲ್ವಂತ


                                          ನಾಗರಾಜ ಕಿರಣಗಿ

No comments:

Post a Comment